ಹೊಸ ಸಹಸ್ರಮಾನಕೆ

ಹೊಸ ಸಹಸ್ರಮಾನಕೆ
ಪ್ರೀತಿಯ ಸುಸ್ವಾಗತ
ಆರತಿ ಎತ್ತಿದೆ ವಿಶ್ವದ
ಕಲ್ಯಾಣಕೆ ಭಾರತ

ಶ್ರುತಿನುಡಿಸಲಿ ಈ ವರ್ಷ
ಶತಮಾನದ ಚಲನೆಗೆ,
ಸತ್ಯ ಸಹನೆ ಅಹಿಂಸೆಗಳ
ತವರು ಮನೆಯ ಹಾಡಿಗೆ

ಆಧ್ಯಾತ್ಮದ ಮೂರ್ತಿ ಹೊತ್ತ
ವಿಜ್ಞಾನದ ರಥಕೆ
ತಡೆಯಿಲ್ಲದ ನಡೆ ಒದಗಲಿ
ಶಿವ ಸುಂದರ ಸತ್ಯಕೆ

ಜಾತಿ ಮತ ಅಜ್ಞಾನದ
ಮೌಢ್ಯದ ತೆರೆಸರಿದು
ಮಂಗಳಮಯ ಪಥ ಬೆಳಗಲಿ
ಜ್ಞಾನ ಜ್ಯೋತಿ ಉರಿದು

ಗಾಂಧಿ ಬುದ್ಧ ಕ್ರಿಸ್ತರನ್ನು
ಹಡೆದ ವಿಶ್ವಮಾತೆಗೆ
ಶುಭ ಸಹಸ್ರ ಒಲಿಯಲಿ ಸ-
ಹಸ್ರ ಮಾನದುದ್ದಕೆ

ಜಯವಾಗಲಿ ಜಯವಾಗಲಿ ಮಂಗಳ ಭೂಮಾತೆಗೆ
ಜೀವಶಕ್ತಿ ಪ್ರಜ್ವಲಿಸುವ ಸೂರ್ಯಪತ್ನಿ ಧಾತ್ರಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆರೆ
Next post ನಲ್ಲ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys